ಉತ್ತರ ಕರ್ನಾಟಕದ ಎರಡು ಜಿಲ್ಲೆಗಳು ಸೇರಿದಂತೆ ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳ ಜವಾಬ್ದಾರಿ ಎನ್‌ಎಚ್‌ಎಐ ಹೆಗಲಿಗೆ | NHAI to Take Over Nine Major Roads in Karnataka, Including Two in North Karnataka: Know details

Karnataka

oi-Madhusudhan KR

NHAI: ರಾಜ್ಯದ ಒಂಬತ್ತು ಪ್ರಮುಖ ರಸ್ತೆಗಳನ್ನು ರಾಜ್ಯ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಿಂದ ಹೊರತೆಗೆದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI)ಕ್ಕೆ ಹಸ್ತಾಂತರಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಅನುಮತಿ ನೀಡಿದೆ. ಈ ಕ್ರಮದಿಂದ ರಾಜ್ಯದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ನಿರ್ವಹಣಾ ವ್ಯವಸ್ಥೆಯನ್ನು ಇನ್ನಷ್ಟು ಸಮರ್ಥವಾಗಿ ನಡೆಸಲು ಸಾಧ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡು, ಕೇರಳ ಮತ್ತು ಕರ್ನಾಟಕದ ಕೆಲವು ಪ್ರಮುಖ ಮಾರ್ಗಗಳನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಉಸ್ತುವಾರಿ ಪಡೆಯಲಿದ್ದು, ಇದರ ಪರಿಣಾಮ ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ ಸಂಚಾರ ಸೌಲಭ್ಯ ಸುಧಾರಿಸುವ ನಿರೀಕ್ಷೆಯಿದೆ. ಏಕರೂಪ ನಿರ್ವಹಣೆ ಹಾಗೂ ವೇಗವಾಗಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.

NHAI to Take Over Nine Major Roads in Karnataka Including Two in North Karnataka Know details

ಎನ್‌ಎಚ್‌ಎಐಗೆ ಹಸ್ತಾಂತರವಾಗುವ ಪ್ರಮುಖ ರಸ್ತೆ ಮಾರ್ಗಗಳು

* ಬಳ್ಳಾರಿ – ಜೇವರ್ಗಿ: 265 ಕಿಲೋ ಮೀಟರ್

* ಶಿವಮೊಗ್ಗ – ಹೊನ್ನಾವರ: 160 ಕಿಲೋ ಮೀಟರ್

* ಹುಬ್ಬಳ್ಳಿ – ವಿಜಯಪುರ: 199 ಕಿಲೋ ಮೀಟರ್

* ಹುಮನಾಬಾದ್‌ನಿಂದ ಕರ್ನಾಟಕ-ಮಹಾರಾಷ್ಟ್ರ ಗಡಿ: 83 ಕಿಲೋ ಮೀಟರ್

* ಬೆರಂಬಾಡಿಯಿಂದ ಕೇರಳ ಗಡಿ: 20 ಕಿಲೋ ಮೀಟರ್

* ಹೊಸಕೋಟೆಯಿಂದ ತಮಿಳುನಾಡು ಗಡಿ ಹಾಗೂ ಹೊಸಕೋಟೆಯಿಂದ ಹೊಸೂರು: ಒಟ್ಟು 60 ಕಿಲೋ ಮೀಟರ್

* ಗುಂಡ್ಯದಿಂದ ಹೆಗ್ಗದ್ದೆ: 25 ಕಿಲೋ ಮೀಟರ್

ಇದರ ಜೊತೆಗೆ, ಎನ್‌ಹೆಚ್-275 ಹೆದ್ದಾರಿಯ ಸಂಪೂರ್ಣ 342 ಕಿಲೋ ಮೀಟರ್ ಮಾರ್ಗವನ್ನು ಮೇಲ್ದರ್ಜೆಗೆ ಏರಿಸಲು ಸಹ ಒಪ್ಪಿಗೆ ದೊರೆತಿದೆ. ಈ ಮಾರ್ಗವು ಮೈಸೂರು – ಬೆಂಗಳೂರು – ಮಂಗಳೂರು ಕಾರಿಡಾರ್‌ನಂತಹ ಪ್ರಮುಖ ಸಂಪರ್ಕ ಮಾರ್ಗಗಳನ್ನು ಒಳಗೊಂಡಿದ್ದು, ಪ್ರವಾಸೋದ್ಯಮ ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ದೊಡ್ಡ ಉತ್ತೇಜನ ನೀಡಲಿದೆ.

ಹೊಸ ನಿಯಮದಂತೆ, ನಾಲ್ಕು ಲೇನ್ ಅಥವಾ ಅದಕ್ಕಿಂತ ಹೆಚ್ಚಿನ ಅಗಲದ ರಸ್ತೆಗಳನ್ನು ಕೇಂದ್ರ ಏಜೆನ್ಸಿಗಳಿಗೆ ಹಸ್ತಾಂತರಿಸಲಾಗುತ್ತದೆ. ಎರಡು ಲೇನ್ ರಸ್ತೆಗಳನ್ನು ರಾಜ್ಯ ಪಿಡಬ್ಲ್ಯೂಡಿ ವಶದಲ್ಲೇ ಉಳಿಸಲಾಗುತ್ತದೆ. ಅಭಿವೃದ್ಧಿ ಪೂರ್ಣಗೊಂಡ ಬಳಿಕ ಅಗತ್ಯ ಇದ್ದರೆ ಮರುಹಸ್ತಾಂತರ ಮಾಡುವ ವ್ಯವಸ್ಥೆಯೂ ಇರಲಿದೆ.

ಅಭಿವೃದ್ಧಿ ಕಾರ್ಯಗಳು ಜಾರಿ

ರಾಜ್ಯ ಸರ್ಕಾರದ ಮೂಲಗಳ ಪ್ರಕಾರ, ಈ ಹಸ್ತಾಂತರದಿಂದ ರಸ್ತೆ ನಿರ್ವಹಣೆಗೆ ಹೆಚ್ಚಿನ ಅನುದಾನ ಲಭ್ಯವಾಗುವ ಸಾಧ್ಯತೆ ಇದೆ. ಜೊತೆಗೆ ಟೋಲ್ ವ್ಯವಸ್ಥೆ, ಸುರಕ್ಷತಾ ಕ್ರಮಗಳು ಹಾಗೂ ವೇಗವಾಗಿ ಅಭಿವೃದ್ಧಿ ಕಾರ್ಯಗಳು ಜಾರಿ ಆಗಲಿವೆ. ಇದರಿಂದ ಉತ್ತರ ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಮತ್ತು ದಕ್ಷಿಣ ಕರ್ನಾಟಕದ ಪ್ರವಾಸೋದ್ಯಮಕ್ಕೆ ದೊಡ್ಡ ಬಲ ದೊರೆಯಲಿದೆ ಎಂದು ನಿರೀಕ್ಷಿಸಲಾಗಿದೆ.

ಎನ್‌ಎಚ್‌ಎಐ ಜವಾಬ್ದಾರಿ ಏನು?

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಭಾರತದ ಪ್ರಮುಖ ಸಂಸ್ಥೆಯಾಗಿದೆ. ಇದು ದೇಶದ ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಯೋಜಿಸಲು, ನಿರ್ಮಿಸಲು ಮತ್ತು ನಿರ್ವಹಿಸಲು ಜವಾಬ್ದಾರಿಯಾಗಿರುವ ಕೇಂದ್ರ ಸರ್ಕಾರದ ಅಧಿಕೃತ ಪ್ರಾಧಿಕಾರ. 1988ರಲ್ಲಿ ಸ್ಥಾಪನೆಯಾದ ಎನ್‌ಎಚ್‌ಎಐ, ಮುಖ್ಯವಾಗಿ ದ್ವಿಪಥ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸುವ ಮೂಲಕ ರಾಜ್ಯಗಳನ್ನು ಪರಸ್ಪರ ಸಂಪರ್ಕಿಸುವುದಕ್ಕೆ ಕೆಲಸ ಮಾಡುತ್ತದೆ. ಇದು ಹೆದ್ದಾರಿ ಅಭಿವೃದ್ಧಿಯಲ್ಲಿ ಪಬ್ಲಿಕ್-ಪ್ರೈವೇಟ್ ಪಾರ್ಟ್ನರ್‌ಶಿಪ್ ಮಾದರಿಯನ್ನು ಬಳಸುತ್ತದೆ ಮತ್ತು ತಿರುವು-ಬೆಳಕು ಸುಧಾರಣೆ, ಸೇತುವೆ ನಿರ್ಮಾಣ, ಮೆಟಲ್ ಲೇಯರ್ ಬಲಪಡಿಸುವಿಕೆ ಮುಂತಾದ ವಿವಿಧ ಕಾರ್ಯಗಳನ್ನು ಕೈಗೊಳ್ಳುತ್ತದೆ.

ರಾಷ್ಟ್ರೀಯ ಹೆದ್ದಾರಿಗಳ ಪ್ರಮುಖ ಲಕ್ಷಣಗಳು

* ದೇಶದ ಪ್ರಮುಖ ನಗರಗಳು, ರಾಜಧಾನಿಗಳು, ಬಂದರುಗಳು, ಕೈಗಾರಿಕಾ ಕೇಂದ್ರಗಳು ಹಾಗೂ ಗಡಿ ಪ್ರದೇಶಗಳನ್ನು ಸಂಪರ್ಕಿಸುತ್ತವೆ.
* ಸಾಮಾನ್ಯವಾಗಿ ಎರಡು ಲೇನ್, ನಾಲ್ಕು ಲೇನ್ ಅಥವಾ ಆರು ಲೇನ್‌ಗಳನ್ನು ಹೊಂದಿರುತ್ತವೆ.
* ಉತ್ತಮ ಗುಣಮಟ್ಟದ ರಸ್ತೆಯಾಗಿರುತ್ತದೆ.
* ಆರ್ಥಿಕ ಬೆಳವಣಿಗೆ, ವ್ಯಾಪಾರ ಮತ್ತು ಪ್ರವಾಸೋದ್ಯಮಕ್ಕೆ ಮಹತ್ವದ ಪಾತ್ರವಹಿಸುತ್ತವೆ.
* ರಾಷ್ಟ್ರೀಯ ಹೆದ್ದಾರಿಗಳು ದೇಶದ ಸಂಚಾರ ಹಾಗೂ ಆರ್ಥಿಕ ಅಭಿವೃದ್ಧಿಗೆ ಅತ್ಯಂತ ಪ್ರಮುಖವಾಗಿವೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/nhai-to-take-over-nine-major-roads-in-karnataka-including-two-in-north-karnataka-know-details-444115.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo