
International
-Shankrappa Parangi
ನವದೆಹಲಿ: ಮಧ್ಯಪ್ರಾಚ್ಯದಲ್ಲಿನ ಯುದ್ಧ ಸಂಘರ್ಷದಿಂದ ಜಾತಿಕವಾಗಿ ಆರ್ಥಿಕತೆಗೆ ಹಾನಿ ಎದುರಾಗುವ ನಿರೀಕ್ಷೆ ನಡುವೆ ಅನೇಕ ರಾಷ್ಟ್ರಗಳ ತೈಲ ಪೂರೈಕೆಯಲ್ಲಿ ಅಡಚಣೆಗಳು ಉಂಟಾಗಿದೆ. ಇಂಧನ ಸಂರಕ್ಷಣೆಗಾಗಿ ಐಟಿ ಕಚೇರಿಗಳಿಗೆ ನಿರ್ಬಂಧ ವಿಧಿಸಲಾಗುತ್ತದೆ. ನೌಕರರಿಗೆ ವರ್ಕ್ ಫ್ರಂ ಹೋಮ್ಗೆ ಆದ್ಯತೆ ನೀಡಲಾಗುತ್ತಿದೆ. ಇಂಧನ, ಅಡುಗೆ ಅನಿಲ ಮಾರಾಟದಲ್ಲಿ ಮಿತಿ ಹೇರಿಕೆ, ಶಾಲೆಗಳಿಗೆ ರಜೆ ಘೋಷಣೆಯಂತಹ ನಿಯಮಗಳನ್ನು ವಿವಿಧ ದೇಶಗಳು ಕೈಗೊಳ್ಳುತ್ತಿವೆ. ಇಂದಿನ ಎಲ್ಪಿಜಿ ಅನಿಲ ಪೂರೈಕೆ ಕೊರತೆ, ಬೆಲೆ ಏರಿಕೆ ಬೆಳವಣಿಗೆಗಳ ಮಧ್ಯೆ ಇವೆಲ್ಲವು ತುರ್ತು ಕ್ರಮಗಳಾಗಿವೆ.
ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ದಾಳಿ ತೀವ್ರಗೊಂಡ ಬೆನ್ನಲ್ಲೆ ಇರಾನ್ ತೈಲ ಪೂರೈಕೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ ಬಂದ್ ಮಾಡಿದೆ. ಇಲ್ಲಿ ತೈಲ ಹಡಗು ಹಾದು ಹೋದರೆ ದಾಳಿ ಮಾಡುವುದಾಗಿ ತಿಳಿಸಿದೆ. ಈ ಸಂಘರ್ಷವು ತೈಲ ಬೆಲೆಗಳಲ್ಲಿ ತೀವ್ರ ಏರಿಳಿತವನ್ನು ಉಂಟು ಮಾಡಿದೆ. ಮಾರ್ಚ್ 9ರಂದು ಸೋಮವಾರ ಪ್ರತಿ ಬ್ಯಾರೆಲ್ಗೆ 119 ಇದ್ದ ಬೆಲೆ ದಾಖಲಾಗಿತ್ತು. ಇದೆಲ್ಲ ನೋಡಿದರೆ ಭಾರತದಲ್ಲೂ ಐಟಿ ನೌಕರರಿಗೆ ವರ್ಕ್ ಫ್ರಂ ಹೋಂ ಮತ್ತೆ ಶುರುವಾಗುತ್ತಾ? ಇಂಧನ ಬಳಕೆ ಮಿತಿ, ದರ ಏರಿಕೆ ಮೇಲೆ ಮಿತಿ ಜಾರಿ ಆಗುತ್ತಾ ಎಂದು ಕಾದು ನೋಡಬೇಕಿದೆ. ಬೇರೆ ಬೇರೆ ದೇಶಗಳಲ್ಲಿ ಕೈಗೊಂಡ ಕ್ರಮಗಳೇನು ಎಂಬ ಮಾಹಿತಿ ಇಲ್ಲಿದೆ.

ಪಾಕಿಸ್ತಾನ: ಶಾಲೆಗಳಿಗೆ ರಜೆ ಘೋಷಣೆ
ತೈಲ ಬಿಕ್ಕಟ್ಟು ಹಿನ್ನೆಲೆಯಲ್ಲಿ ಪಾಕಿಸ್ತಾನವು ಎರಡು ವಾರಗಳ ಕಾಲ ಶಾಲೆಗಳನ್ನು ಮುಚ್ಚುವಂತೆ ಸೋಮವಾರ ಆದೇಶಿಸಿದೆ. ಇಂಧನವನ್ನು ಸಂರಕ್ಷಿಸುವ ಪ್ರಯತ್ನಗಳ ಭಾಗವಾಗಿ ಕಚೇರಿ ನೌಕರರನ್ನು ಮನೆಯಿಂದಲೇ ಕೆಲಸ ಮಾಡುವಂತೆ ನಿರ್ದೇಶಿಸಲಾಗಿದೆ ಎಂದು ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದಾರೆ. ಇನ್ನೂ ಸರ್ಕಾರಿ ಇಲಾಖೆಗಳಿಗೆ ಇಂಧನ ಭತ್ಯೆಯನ್ನು ಎರಡು ತಿಂಗಳವರೆಗೆ ಶೇ.50 ರಷ್ಟು ಕಡಿತಗೊಳಿಸಲಾಗುವುದು. ಹೆಚ್ಚಿನ ವಾಹನಗಳನ್ನು ರಸ್ತೆಗೆ ಇಳಿಯದಂತೆ ನೋಡಿಕೊಳ್ಳಲಾಗಿದೆ.
ಬಾಂಗ್ಲಾದೇಶದಲ್ಲಿ ಕೈಗೊಂಡ ಕ್ರಮಗಳೇನು?
ಬಾಂಗ್ಲಾದೇಶವು ಇಂಧನ ಮಾರಾಟದ ಮೇಲೆ ದೈನಂದಿನ ಮಿತಿ ನಿಗದಿಪಡಿಸಿದೆ. ವಿದ್ಯುತ್ ಸಂರಕ್ಷಿಸಲು ಮತ್ತು ಸಾರಿಗೆ ಬೇಡಿಕೆಯನ್ನು ಕಡಿತಗೊಳಿಸಲು ಸರ್ಕಾರ ವಿಶ್ವವಿದ್ಯಾಲಯಗಳನ್ನು ಬಂದ್ ಮಾಡಿ ನಿರ್ದೇಶಿಸಿದೆ. ದೇಶವು ತನ್ನ ವಿದ್ಯುತ್ ಬೇಡಿಕೆ ಪೂರೈಸಲು ಅನಿಲಕ್ಕಾಗಿ ಪಶ್ಚಿಮ ಏಷ್ಯಾದ ರಾಷ್ಟ್ರಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ಹೀಗಾಗಿ ರೈಲ ಬಿಕ್ಕಟ್ಟು ಎದುರಿಸಲು ಈ ಕ್ರಮ ಕೈಗೊಂಡಿದೆ ಎಂದು ವರದಿ ಆಗಿದೆ.
ವಿಯೆಟ್ನಾಂ: ವರ್ಕ್ ಫ್ರಂ ಹೊಮ್
ಇಂಧನ, ಅಡುಗೆ ಅನಿಲ ಸರಬರಾಜು ಅಡಚಣೆಗಳ ಮಧ್ಯ ಇಂಧನ ಸಂರಕ್ಷಿಸಲು ವಿಯೆಟ್ನಾಂ ನಲ್ಲಿ ಸ್ಥಳೀಯ ವ್ಯವಹಾರಗಳನ್ನು ತಮ್ಮ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಉತ್ತೇಜಿಸಲಾಗಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಇದಕ್ಕೂ ಮೊದಲು ಇಂಧನ ಆಮದಿನ ಮೇಲಿನ ತೆರಿಗೆಗಳನ್ನು ತಾತ್ಕಾಲಿಕವಾಗಿ ತೆಗೆದು ಹಾಕಲು ನಿರ್ಧರಿಸಲಾಗಿತ್ತು. ಅದಿನ್ನು ಜಾರಿಗೆ ಬರಬೇಕಿದೆ.
ದಕ್ಷಿಣ ಕೊರಿಯಾದಲ್ಲೂ ತುರ್ತು ಕ್ರಮ
ತುರ್ತು ಇಂಧನ ಉಳಿತಾಯ ಕ್ರಮಗಳ ಭಾಗವಾಗಿ ದಕ್ಷಿಣ ಕೋರಿಯಾದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಮಿತಿ ಹೇರಿದೆ. ದಿಢೀರ್ ಏರಿಕೆ ತಡೆಯಲು ಮುಂದಾಗಿದೆ. ತೈಲ ಸಂಸ್ಕರಣಾಗಾರಗಳು ಮತ್ತು ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ಲಭ್ಯತೆಗೆ ಆದ್ಯತೆ ನೀಡಲಾಗಿದೆ. ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡಲಾಗಿದೆ. ಮಧ್ಯಪ್ರಾಚ್ಯ ಯುದ್ಧವು ದೇಶದ ಆರ್ಥಿಕತೆಯ ಮೇಲೆ ಗಮನಾರ್ಹ ಹೊರೆ ಉಂಟು ಮಾಡಿದೆ ಎಂದು ಅಲ್ಲಿನ ಅಧ್ಯಕ್ಷ ಲೀ ಜೇ ಮ್ಯುಂಗ್ ಹೇಳಿದ್ದಾರೆ.
ತೈವಾನ್ ಮತ್ತು ಥೈಲ್ಯಾಂಡ್ನಲ್ಲಿ ಸರಕು ತೆರಿಗೆ ಕಡಿತ
ಇನ್ನೂ ಹಾಗೂ ಥೈಲಾಂಡ್ ದೇಶಗಳ ಪೈಕಿ ತೈವಾನ್ ಸರ್ಕಾರ ಸೋಮವಾರ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳನ್ನು ಹೆಚ್ಚಿಸಿದೆ. ಮತ್ತೊಂದೆಡೆ ಗ್ರಾಹಕರು ಮತ್ತು ವ್ಯವಹಾರಗಳ ಮೇಲಿನ ಸರಕು ತೆರಿಗೆ ಕಡಿಮೆ ಮಾಡುವ ಮೂಲಕ ಕೊಂಚ ಹೊರೆ ಇಳಿಕೆಗೆ ನಿರ್ಧರಿಸಿದೆ. ಅದೇ ರೀತಿ ಥೈಲ್ಯಾಂಡ್ ಇಂಧನ ಬೆಲೆಯನ್ನು 15 ದಿನಗಳವರೆಗೆ ಮಿತಿಗೊಳಿಸುವುದಾಗಿ ತಿಳಿಸಿದೆ.
-

LPG Gas: ದೇಶದಲ್ಲಿ’ಅಡುಗೆ ಅನಿಲ ತುರ್ತು ಪರಿಸ್ಥಿತಿ’ ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ
-

LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ
-

Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ
-

ಇರಾನ್ ನೂತನ ಸರ್ವಾಧಿಕಾರಿ ಮೇಲೆ ಅಮೆರಿಕ ಕಣ್ಣು, ಖಮೇನಿ ಪುತ್ರನ ಬಗ್ಗೆ ಚರ್ಚೆ ಶುರು | Operation Roaring Lion
-

ಭಾರತಕ್ಕೆ ಬಂಪರ್, ರಷ್ಯಾ ಮೂಲಕ 30 ಮಿಲಿಯನ್ ಬ್ಯಾರಲ್ ತೈಲ ಖರೀದಿ | Operation Roaring Lion
-

Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ?
-

ಮಧ್ಯಪ್ರಾಚ್ಯ ಯುದ್ಧ: ಗ್ಯಾಸ್ ಸಿಲಿಂಡರ್, ಪೆಟ್ರೋಲ್ – ಡಿಸೇಲ್ ಸೇರಿದಂತೆ ಪ್ರಮುಖ ವಸ್ತುಗಳ ಬಗ್ಗೆ ಕೇಂದ್ರದಿಂದ ಮಹತ್ವದ ಆದೇಶ
-

ಇರಾನ್ ನಾಯಕರೊಂದಿಗೆ ಸಂಪರ್ಕಕ್ಕೆ ಯತ್ನ: ಭಾರತದ ಈ ಕ್ರಮಕ್ಕೆ ಇರಾನ್ ಧನ್ಯವಾದ ಹೇಳಿದೆ: ವಿದೇಶಾಂಗ ಸಚಿವ ಎಸ್ ಜೈಶಂಕರ್
-

Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ – ಡೀಸೆಲ್ ಬೆಲೆ 20 – 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ
-

War Updates: ಇರಾನ್ಗೆ ಟ್ರಂಪ್ ವಾರ್ನಿಂಗ್: ತೈಲ ಮಾರ್ಗ ಬಂದ್ ಮಾಡಿದರೆ ದೇಶವೇ ಸರ್ವನಾಶ, ಇಂದಿನ ಪ್ರಮುಖಾಂಶಗಳು
-

Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು
-

ಇಸ್ರೇಲ್-ಯುಎಸ್ ಜಂಟಿ ದಾಳಿ ಅಬ್ಬರ: ಇರಾನ್ಗೆ ಉತ್ತರಾಧಿಕಾರಿ ನೇಮಕ, ಇಂದಿನ ಪ್ರಮುಖಾಂಶಗಳು ಇಲ್ಲಿವೆ
-

Amazon Layoffs: ಅಮೆಜಾನ್ನಿಂದ ಮತ್ತೆ ಉದ್ಯೋಗ ವಜಾ, ಮೂರೇ ವರ್ಷದಲ್ಲಿ 57,000 ಮಂದಿ ಮನೆಗೆ
-

ಎಲ್ಪಿಜಿ ಸಿಲಿಂಡರ್ ಪೂರೈಕೆ ಸ್ಥಗಿತ: ನಾಳೆಯಿಂದ ಬೆಂಗಳೂರಿನಾದ್ಯಂತ ಹೋಟೆಲ್ಗಳು ಬಂದ್
-

Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ಈ ಪ್ರದೇಶ ಬೆಸ್ಟ್: ಉದ್ಯಮಿ ಕಿರಣ್ ಮಜುಂದಾರ್ ಶಾ
Disclaimer: This content was automatically imported from a third-party source via RSS feed. The original source is: https://kannada.oneindia.com/news/international/will-work-from-home-return-global-fuel-crisis-leads-to-office-restrictions-amid-mideast-war-011-446737.html. xn--babytilbehr-pgb.com does not claim ownership of this content. All rights remain with the original publisher.
