
Sports
oi-Madhusudhan KR
RCB Won WPL 2026 Trophy: ಡಬ್ಲ್ಯೂಪಿಎಲ್ 2026 ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಗೆಲುವು ಸಾಧಿಸಿ ಚಾಂಪಿಯನ್ ಆಯಿತು. ಹಾಗಾದ್ರೆ, ಆರ್ಸಿಬಿ ಟ್ರೋಫಿ ಗೆಲ್ಲಲು ಪ್ರಮುಖ ಕಾರಣಕರ್ತೆಯರಾದ ಆಟಗಾರ್ತಿಯರು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಫಬ್ರವರಿ 5ರಂದು ವಡೋದರಾದಲ್ಲಿ ನಾಲ್ಕನೇ ಆವೃತ್ತಿಯ ಡಬ್ಲ್ಯೂಪಿಎಲ್ ಫೈನಲ್ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸ್ಮೃತಿ ಮಂಧಾನ ನಾಯಕತ್ವದ ಆರ್ಸಿಬಿ ತಂಡ ಮುಖಾಮುಖಿಯಾದವು. ಟಾಸ್ ಸೋತು ಮೊದಲು ಬ್ಯಾಟ್ ಬೀಸಿದ ಜೆಮಿಮಾ ರೋಡ್ರಿಗಸ್ ಪಡೆ ನಿಗದಿತ 20 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಬರೋಬ್ಬರಿ 203 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.

ಆರ್ಸಿಬಿ ಗೆಲುವಿಗೆ ಕಾರಣಗಳೇನು?: ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 204 ಬೃಹತ್ ರನ್ಗಳನ್ನು ಗುರಿಯನ್ನು ಸ್ಮೃತಿ ಮಂಧಾನ ಪಡೆಯು19.4 ಓವರ್ಗಳಲ್ಲಿ ತಲುಪಿ ಚಾಂಪಿಯನ್ ಪಟ್ಟ ಅಲಂಕರಿಸಿತು. ಈ ಮೂಲಕ ಎಡರನೇ ಬಾರಿ ಟ್ರೋಫಿ ಗೆದ್ದುಕೊಂಡಿತು. 2024 ಹಾಗೂ 2026ರಲ್ಲಿ ಒಟ್ಟು ಎರಡು ಬಾರಿ ಚಾಂಪಿಯನ್ ಆಯಿತು. 2023 ಹಾಗೂ 2025ರಲ್ಲಿ ಮುಂಬೈ ಇಂಡಿಯನ್ಸ್ ಈ ಸಾಧನೆ ಮಾಡಿದೆ. ಇನ್ನೂ ಈ ಬಾರಿ ಆರ್ಸಿಬಿಗೆ ಗೆಲುವಿಗೆ ನಾಯಕಿ ಸ್ಮೃತಿ ಮಂಧಾನ ಸೇರಿದಂತೆ ಹಲವರು ಪ್ರಮುಖ ಪಾತ್ರವಹಿಸಿದ್ದಾರೆ.
ಆರ್ಸಿಬಿ ಗೆಲುವಿಗೆ ಪ್ರಮುಖ ಕಾರಣಗಳು
* ಸ್ಮೃತಿ ಮಧಾನ, ಜಾರ್ಜಿಯಾ ವೋಲ್ ಸ್ಫೋಟಕ ಬ್ಯಾಟಿಂಗ್
* ರಾಧಾ ಯಾದವ್ ಕೊನೆಯಲ್ಲಿ ಸಿಡಿಸಿದ ಎರಡು ಬೌಂಡರಿಗಳು
* ಲಾರೆನ್ ಬೆಲ್ ಮಾರಕ ಬೌಲಿಂಗ್ ದಾಳಿ
* ಲಾರೆನ್ ಬೆಲ್ ನಾಲ್ಕು ಓವರ್ ಬೌಲಿಂಗ್ ಮಾಡಿ ಡೆಲ್ಲಿ ಬ್ಯಾಟರ್ಗಳಿಗೆ ಕಾಡಿ ಕೇವಲ 19 ರನ್ಗಳನ್ನು ಮಾತ್ರ ಬಿಟ್ಟುಕೊಟ್ಟರು.
ಸ್ಫೋಟಕ ಬ್ಯಾಟ್ ಬೀಸಿದ ಸ್ಮೃತಿ ಮಂಧಾನ: ಡಬ್ಲ್ಯೂಪಿಎಲ್ 2026ರ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವಲ್ಲಿ ಹಲವು ಪ್ರಮುಖ ಕಾರಣಗಳಿವೆ. ತೀವ್ರ ಜ್ವರದಿಂದ ಬಳಲುತ್ತಿದ್ದರೂ ಸಹ ಸ್ಮೃತಿ ಮಂಧಾನ ಅವರು 41 ಎಸೆತಗಳಲ್ಲಿ 87 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದರು. ಆರಂಭದಲ್ಲೇ ಆಕ್ರಮಣಕಾರಿ ಆಟವಾಡಿ ತಂಡಕ್ಕೆ ಉತ್ತಮ ಆರಂಭ ನೀಡಿದರು. ಒತ್ತಡದ ಫೈನಲ್ ಪಂದ್ಯದಲ್ಲಿ ಶಾಂತತೆಯಿಂದ ಆಟ ಆಡಿ ಗಮನ ಸೆಳೆದರು. ಆರಂಭದಲ್ಲಿ ಗ್ರೇಸ್ ಹ್ಯಾರಿಸ್ ವಿಕೆಟ್ ಒಪ್ಪಿಸಿದಾಗಲೂ ಯಾವುದೇ ಒತ್ತಡ ಮಾಡಿಕೊಳ್ಳದೆ, ಸ್ಮೃತಿ ಶಾಂತತೆಯಿಂದ ಆಟ ಮುಂದುವರೆಸಿದರು.
* ಸ್ಮೃತಿ ಮಂಧಾನ ಹಾಗೂ ಆಸ್ಟ್ರೇಲಿಯಾದ ಜಾರ್ಜಿಯಾ ವೋಲ್ ಉತ್ತಮ ಜೊತೆಯಾಟ ಆಡಿದರು. ಈ ಮೂಲಕ ಇವರಿಬ್ಬರು ಆರ್ಸಿಬಿ ಬೃಹತ್ ರನ್ಗಳನ್ನು ಕಲೆಹಾಕಿ ತಂಡವನ್ನು ಗೆಲುವಿಗೆ ಪ್ರಮುಖ ಪಾತ್ರವಹಿಸಿದರು. ಅಲ್ಲದೆ, ಈ ಇಬ್ಬರೂ ಡೆಲ್ಲಿ ಬೌಲರ್ಗಳ ಬೆವರಿಳಿಸಿದಂತೂ ನಿಜ.
* ಟಾಪ್ ಆರ್ಡರ್ ನಂತರ ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಜವಾಬ್ದಾರಿಯುತವಾಗಿ ಬ್ಯಾಟಿಂಗ್ ಮಾಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ನಾಲ್ಕು ಬಾಲ್ಗಳಿಗೆ ಎಂಟು ರನ್ ಬೇಕಾದಾದ ರಾಧಾ ಯಾದನ್ ಸತತ ಎರಡು ಬೌಂಡರಿಗಳನ್ನು ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸಿ ಅಜೇಯರಾಗಿ ಉಳಿದರು.
* ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಬೃಹತ್ ಮೊತ್ತ ಹಾಕಲು ಅವಕಾಶ ನೀಡದಂತೆ ಆರ್ಸಿಬಿ ಬೌಲರ್ಗಳು ಆರಂಭದಿಂದಲೇ ಮಾರಕ ಬೌಲಿಂಗ್ ದಾಳಿ ನಡೆಸಿದರು. ಮಧ್ಯದ ಓವರ್ಗಳಲ್ಲಿ ವಿಕೆಟ್ಗಳನ್ನು ಕಬಳಿಸಿ ಎದುರಾಳಿ ಬ್ಯಾಟರ್ಗಳ ವೇಗಕ್ಕೆ ಕಡಿವಾಣ ಹಾಕಿದರು. ಇನ್ನೂ ಆರ್ಸಿಬಿ ಆಟಗಾರ್ತಿಯರು ಕ್ಯಾಚ್ಗಳು, ರನ್ಔಟ್ ಪ್ರಯತ್ನಗಳು ಹಾಗೂ ಮೈದಾನದಲ್ಲಿ ತೋರಿದ ಅದ್ಭುತ ಪ್ರದರ್ಶನ ಡೆಲ್ಲಿ ತಂಡದ ಮೇಲೆ ಹೆಚ್ಚು ಒತ್ತಡ ತಂದಿತು.
ಹೀಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮೂರು ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿ ಫೈನಲ್ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತು. ಇದರಿಂದಲೇ ಫೈನಲ್ನಲ್ಲಿ ಆರ್ಸಿಬಿ ಗೆದ್ದು ಚಾಂಪಿಯನ್ ಆಯಿತು.
Disclaimer: This content was automatically imported from a third-party source via RSS feed. The original source is: https://kannada.oneindia.com/news/sports/wpl-2026-key-reasons-behind-royal-challengers-bengaluru-s-final-victory-over-delhi-capitals-442803.html. xn--babytilbehr-pgb.com does not claim ownership of this content. All rights remain with the original publisher.
