
International
oi-Malathesha M
ಭಾರತ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ತನ್ನ ಶಕ್ತಿ & ಸಾಮರ್ಥ್ಯ ತೋರಿಸುವ ಸಮಯ ಬಂದಿದ್ದು, ಅಕ್ಕಪಕ್ಕ ಇರುವ ಶತ್ರು ದೇಶಗಳಿಗೆ ಸರಿಯಾಗಿ ಬುದ್ಧಿ ಹೇಳುವ ಕಾಲ ಕೂಡ ಕೂಡಿ ಬಂದಿದೆ. ಹೀಗೆ ಭಾರತ ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಮುಂದೆ ನುಗ್ಗುವಾಗ, ನೆರೆ ದೇಶಗಳೇ ವಿಲನ್ ಆಗಿದ್ದವು. ಅದರಲ್ಲೂ ಬಾಂಗ್ಲಾದೇಶ ಆಡುತ್ತಿದ್ದ ರೀತಿ ನೋಡಿದರೆ ಭವಿಷ್ಯದಲ್ಲಿ ಬಾಂಗ್ಲಾ ಮತ್ತೊಂದು ಪಾಕಿಸ್ತಾನ ಆಗುವ ಆತಂಕ ಕೂಡ ಮೂಡಿತ್ತು. ಹೀಗಿದ್ದಾಗ ಭಾರತ ಕೂಡ ಅಳೆದು & ತೂಗಿ ಹಲವು ಲೆಕ್ಕಾಚಾರ ಹಾಕಿ ಬಾಂಗ್ಲಾದೇಶದ ಹೆಡೆಮುರಿ ಕಟ್ಟಲು ಮುಂದೆ ನುಗ್ಗಿತ್ತು. ಇದೀಗ ಅದರ ಪ್ರತಿಫಲ ಎನ್ನುವಂತೆ ಭಾರತಕ್ಕೆ 2 ವರ್ಷಗಳ ನಂತರ ಭರ್ಜರಿ ಗೆಲುವು ಸಿಕ್ಕಿದೆ.
ಬಾಂಗ್ಲಾದೇಶ ಇಂದು ಒಂದು ಸ್ವತಂತ್ರ ದೇಶವಾಗಿದೆ ಎಂದರೆ ಅದಕ್ಕೆ ಭಾರತವೇ ಕಾರಣವಾಗಿದ್ದು, ಈ ದೇಶಕ್ಕೆ ಭಾರತವೇ ಹಲವು ವಿಚಾರದಲ್ಲಿ ಗಾಡ್ ಫಾದರ್ ಕೂಡ. ಬಾಂಗ್ಲಾದೇಶ ಇಂದು ಗಾರ್ಮೆಂಟ್ಸ್ ಸೇರಿದಂತೆ ಹಲವು ಉದ್ಯಮ ಕಟ್ಟಿ ಬೆಳೆಸಲು ಹಾಗೂ ಕೈಗಾರಿಕೆಗಳನ್ನು ಅಭಿವೃದ್ಧಿ ಮಾಡಲು ಕೂಡ ಭಾರತ ಬಲ ತುಂಬಿತ್ತು. ಇಷ್ಟೆಲ್ಲಾ ಇದ್ದರೂ ಬಾಂಗ್ಲಾದೇಶದ ರಾಜಕೀಯ ನಾಯಕರು ಇಲ್ಲಸಲ್ಲದ ವಿಚಾರಗಳನ್ನು ಸೃಷ್ಟಿ ಮಾಡಿ, ಭಾರತದ ವಿರುದ್ಧವೇ ಹಗೆ ಸಾಧಿಸಲು ಮುಂದಾಗಿದ್ದರು. ಅಲ್ಲದೇ ಈ ರೀತಿ ಮಾಡಿದ್ದಕ್ಕೆ ತಕ್ಕ ಬೆಲೆ ಕೂಡ ತೆರುತ್ತಿದ್ದಾರೆ ಅವರು. ಇಷ್ಟೆಲ್ಲದರ ನಡುವೆ ಪಾಕಿಸ್ತಾನಕ್ಕೆ ಇದೀಗ ಭಾರತ ಸರಿಯಾಗೇ ಪೆಟ್ಟು ಕೊಟ್ಟಿದೆ.

ಪಾಕಿಸ್ತಾನ ಬೆಂಬಲಿತ ಪಕ್ಷಕ್ಕೆ ಭಾರಿ ಹಿನ್ನಡೆ
ಭಾರತ ಮತ್ತು ಬಾಂಗ್ಲಾ ನಡುವೆ ಕಿರಿಕ್ ಶುರುವಾದ ನಂತರ ಅದರ ಲಾಭ ಪಡೆಯಲು ಪಾಕಿಸ್ತಾನದ ಸರ್ಕಾರ ಮುಂದಾಗಿತ್ತು. ಅದರಲ್ಲೂ ಬಾಂಗ್ಲಾದೇಶ ಚುನಾವಣೆಯಲ್ಲಿ ತಮ್ಮ ಮಾತು ಕೇಳುವಂತಹ ಅಭ್ಯರ್ಥಿಗಳು ಗೆದ್ದರೆ ತಾವು ಹೇಳಿದಂತೆ ಕೇಳುತ್ತಾರೆ ಎಂಬ ಲೆಕ್ಕಾಚಾರ ಹಾಕಿಕೊಂಡಿತ್ತು. ಈ ಕಾರಣಕ್ಕೆ ಜಮಾತೆ-ಇ-ಇಸ್ಲಾಮಿ ಪಕ್ಷಕ್ಕೆ ಬೆಂಬಲ ನೀಡಿದ್ದ ಪಾಕಿಸ್ತಾನ, ಆ ಪಕ್ಷ ಗೆಲ್ಲುತ್ತದೆ ಎಂಬ ನಿರೀಕ್ಷೆಯಲ್ಲಿ ಕಾಯುತ್ತಾ ಕುಳಿತಿತ್ತು.
ಆದರೆ ಅದು ನಡೆಯಲೇ ಇಲ್ಲ, ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯು ಪೂರ್ಣ ಬಹುಮತ ಪಡೆದು ಈವರೆಗೂ ಸುಮಾರು 212 ಸ್ಥಾನಗಳಲ್ಲಿ ಗೆದ್ದಿದೆ. ಈ ಮೂಲಕ 300 ಸ್ಥಾನಗಳ ಬಲವನ್ನು ಹೊಂದಿರುವ ಬಾಂಗ್ಲಾದೇಶ ಸಂಸತ್ನಲ್ಲಿ ಭಾರತದ ಜೊತೆಯಲ್ಲಿ ಉತ್ತಮ ಸಂಬಂಧ ಹೊಂದಿರುವ ವ್ಯಕ್ತಿ, ಎಂದರೆ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ತಾರಿಕ್ ರಹ್ಮಾನ್ ಪ್ರಧಾನಿ ಆಗುತ್ತಿದ್ದಾರೆ. ಪಾಕ್ಗೆ ಇದು ಮತ್ತೊಮ್ಮೆ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇನ್ಯಾವ ಕುತಂತ್ರ ಮಾಡಲಿದೆ ಎಂಬುದನ್ನ ಕಾದು ನೋಡಬೇಕಿದೆ.
ಪಾಕಿಸ್ತಾನಕ್ಕೆ ಮತ್ತೊಮ್ಮೆ ದೊಡ್ಡ ಸೋಲು
ಬಿಎನ್ಪಿ ಪಕ್ಷದ ತಾರಿಕ್ ರಹ್ಮಾನ್ಗೆ ಪ್ರಧಾನಿ ಪಟ್ಟ ಫಿಕ್ಸ್ ಆಗಿದ್ದು, ಭಾರತದ ಜೊತೆ ಚನ್ನಾಗಿದ್ದಾರೆ. ಜಗತ್ತಿನ ಶಕ್ತಿಶಾಲಿ ದೇಶಗಳ ಪೈಕಿ ಒಂದಾಗಿರುವ ಭಾರತಕ್ಕೆ ಈಗ ಬಾಂಗ್ಲಾದೇಶದ ಸ್ನೇಹ ಅನಿವಾರ್ಯ ಅಲ್ಲ, ಆದರೆ ಭವಿಷ್ಯದ ದೃಷ್ಟಿಯಿಂದ ಎರಡೂ ದೇಶಗಳು ಒಟ್ಟಿಗೆ ಸಾಗಬೇಕಿದೆ. ಇಂತಹ ಸಮಯ ಹಾಗೂ ಸಂದರ್ಭವನ್ನು ಕೇಂದ್ರದ ಎನ್ಡಿಎ ಸರ್ಕಾರ ಅಳೆದು & ತೂಗಿ ಲೆಕ್ಕಾಚಾರ ಹಾಕುತ್ತಾ ಇದೆ. ಈ ಕಾರಣಕ್ಕೆ ಬಾಂಗ್ಲಾ ಜೊತೆಗೆ ಮತ್ತೊಮ್ಮೆ ಮಾತುಕತೆ ಆರಂಭವಾಗುವ ನಿರೀಕ್ಷೆಗಳು ಇವೆ.
ಹೀಗಿದ್ದಾಗ ಬಾಂಗ್ಲಾದೇಶ ನ್ಯಾಷನಲಿಸ್ಟ್ ಪಾರ್ಟಿ ಪೂರ್ಣ ಬಹುಮತ ಪಡೆದು, ಬಾಂಗ್ಲಾದಲ್ಲಿ ಸರ್ಕಾರ ರಚಿಸುವ ಸುದ್ದಿ ಸಿಗುತ್ತಿದ್ದಂತೆ ಪ್ರಧಾನಿ ಮೋದಿ ಅವರು ಬಿಎನ್ಪಿ ಪಕ್ಷದ ನಾಯಕನಿಗೆ ಕರೆ ಮಾಡಿ ಶುಭ ಕೋರಿದ್ದಾರೆ. ಈ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಭಾರತದ ಎದುರಲ್ಲಿ ದೊಡ್ಡ ಸೋಲು ಬಾಂಗ್ಲಾ ನೆಲದಲ್ಲಿ ಎದುರಾಗಿದ್ದು, ಪಾಕಿಸ್ತಾನ ಮಾಡಿದ್ದ ಕುತಂತ್ರ ಮತ್ತೊಮ್ಮೆ ಅದೇ ದೇಶಕ್ಕೆ ದೊಡ್ಡ ಮುಳುವಾಗಿ ಪರಿಣಮಿಸಿದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/international/bangladesh-election-result-2026-and-this-is-how-the-pakistan-is-lost-the-election-plan-in-bangladesh-443687.html. xn--babytilbehr-pgb.com does not claim ownership of this content. All rights remain with the original publisher.
