
India
oi-Malathesha M
ಬಾಂಗ್ಲಾದೇಶಕ್ಕೆ ಒಂದು ರೀತಿ ಭಾರತ ತಂದೆ ಇದ್ದಂತೆ, ಏಕೆಂದರೆ ಪಾಕಿಸ್ತಾನದ ಹಿಡಿತಕ್ಕೆ ಸಿಲುಕಿದ್ದ ಬಾಂಗ್ಲಾದೇಶ ಎಂಬ ಪುಟಾಣಿ ಪ್ರದೇಶವನ್ನ ಸ್ವತಂತ್ರ ದೇಶವಾಗಿ ರೂಪುಗೊಳ್ಳಲು ಸಹಾಯ ಮಾಡಿದ್ದೇ ಭಾರತ. ಆದರೆ ಭಾರತ ಮಾಡಿದ್ದ ಈ ಸಹಾಯ ಮರೆತು ಕಳೆದ 2 ವರ್ಷಗಳಿಂದ ಬಾಂಗ್ಲಾದೇಶದಲ್ಲಿ ಅಸ್ತಿತ್ವದಲ್ಲಿದ್ದ ಹಂಗಾಮಿ ಸರ್ಕಾರ, ಪದೇ ಪದೇ ಕಿರಿಕ್ ತೆಗೆಯುತ್ತಿತ್ತು. ಭಾರತ ಕೂಡ ಇದನ್ನೆಲ್ಲಾ ಸೂಕ್ತವಾಗಿ ನಿಭಾಯಿಸಿ, ಬಾಂಗ್ಲಾ ನೆಲದಲ್ಲಿ ಏನು ಮಾಡಬೇಕೋ ಅದನ್ನೇ ಮಾಡಿದೆ. ಈಗ ಭಾರತದ ಜೊತೆಗೆ ಸಂಬಂಧ ಸುಧಾರಣೆ ಮಾಡಲು ಕಾಯುತ್ತಿರುವ ವ್ಯಕ್ತಿಯೇ ಬಾಂಗ್ಲಾದೇಶದ ಪ್ರಧಾನಿ ಆಗುತ್ತಾ ಇದ್ದು, ತಾರಿಕ್ ರೆಹಮಾನ್ ಸರ್ಕಾರದ ಮೇಲೆ ನಿರೀಕ್ಷೆಯ ಭಾರ ಹೆಚ್ಚಾಗಿದೆ.
ತಾರಿಕ್ ರೆಹಮಾನ್ ಈಗಾಗಲೇ ಭಾರತದ ಜೊತೆಗೆ ಸಂಬಂಧ ಸುಧಾರಣೆ ಬಗ್ಗೆ ಒಲವು ತೋರಿದ್ದಾರೆ. ಬಾಂಗ್ಲಾದೇಶ 1971ರ ಸಮಯದಲ್ಲಿ ಹೋರಾಡಿ, ಪಾಕಿಸ್ತಾನದ ಹಿಡಿತದಿಂದ ತಪ್ಪಿಸಿಕೊಂಡು ಹೊಸ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಲು ಭಾರತವೇ ಕಾರಣ. ಹೀಗೆ ಬಾಂಗ್ಲಾದೇಶ ಎಂದೆಂದಿಗೂ ಈ ಸಹಾಯವನ್ನು ಮತ್ತು ಭಾರತ ಕೊಟ್ಟಿದ್ದ ಬೆಂಬಲವನ್ನು ಮರೆಯಬಾರದು ಕೂಡ. ಇದನ್ನು ತಾರಿಕ್ ರೆಹಮಾನ್ ಅವರ ಆಡಳಿತ ನೆನಪು ಮಾಡಿಕೊಳ್ಳುವುದು ಗ್ಯಾರಂಟಿ, ಅದರಲ್ಲೂ ನೆರೆ ದೇಶದ ಜೊತೆ ಸ್ನೇಹ ಸಂಬಂಧ ಗಟ್ಟಿ ಮಾಡಿಕೊಂಡರೆ ಅದು ಬಾಂಗ್ಲಾದೇಶ ಆರ್ಥಿಕತೆ ಬೆಳವಣಿಗೆಗೆ ಕೂಡ ಪೂರಕ ಎಂಬುದು ಚನ್ನಾಗಿ ತಿಳಿದಿದೆ. ಇದೇ ನಿರೀಕ್ಷೆಯಲ್ಲಿ ಈಗ ಆದಷ್ಟು ಬೇಗ ಎರಡೂ ದೇಶಗಳು ಮಹತ್ವದ ಮಾತುಕತೆ ನಡೆಸುವ ನಿರೀಕ್ಷೆ ಇದೆ.

ಬಾಂಗ್ಲಾ ಭಾವಿ ಪ್ರಧಾನಿ ಹೇಳಿಕೆ
ಬಾಂಗ್ಲಾದೇಶದ ಮುಂದಿನ ಪ್ರಧಾನಿ ಪಟ್ಟಕ್ಕೆ ಬಹುತೇಕ ತಾರಿಕ್ ರೆಹಮಾನ್ ಆಯ್ಕೆ ಖಚಿತವಾಗಿದ್ದು, ಇದೀಗ ಬಾಂಗ್ಲಾದ ಭವಿಷ್ಯದ ವಿದೇಶಾಂಗ ನೀತಿ ಕುರಿತು ತಾರಿಕ್ ರೆಹಮಾನ್ ನೀಡಿರುವ ಹೇಳಿಕೆಗಳು ಗಮನ ಸೆಳೆದಿದೆ. ನನಗೆ ರಾಷ್ಟ್ರೀಯ ಹಿತಾಸಕ್ತಿಯೇ ಅತಿಮುಖ್ಯ ಮತ್ತು ಅದರಲ್ಲಿ ರಾಜಿ ಆಗುವ ಮಾತಿಲ್ಲ ಎಂದು ಹೇಳಿರುವುದು ಮತ್ತೊಂದು ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಅದರಲ್ಲೂ, ಭಾರತದ ಜೊತೆ ಸಂಬಂಧ ಸುಧಾರಣೆ ವಿಚಾರದಲ್ಲಿ ನಮಗೆ ಬಾಂಗ್ಲಾದೇಶ & ಬಾಂಗ್ಲಾದೇಶದ ಜನರೇ ಮೊದಲು ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ. ಆದರೆ ಇದೆಲ್ಲವನ್ನೂ ಮೀರಿ ತಾರಿಕ್ ರೆಹಮಾನ್ ಈಗ ಭಾರತದ ಜೊತೆಗೆ ಉತ್ತಮ ಸಂಬಂಧ ಕಾಯ್ದುಕೊಳ್ಳುವ ನಿರೀಕ್ಷೆ ಇದೆ.
Disclaimer: This content was automatically imported from a third-party source via RSS feed. The original source is: https://kannada.oneindia.com/news/india/bangladesh-election-results-2026-and-explore-the-future-of-bangladesh-relations-with-the-india-443793.html. xn--babytilbehr-pgb.com does not claim ownership of this content. All rights remain with the original publisher.
