
Karnataka
oi-Shankrappa Parangi
ಬೆಂಗಳೂರು: ಹೋಳಿ ಹಬ್ಬದ ಸಡಗರಕ್ಕೆ ಸಾಥ್ ನೀಡಲು ನೈರುತ್ಯ ರೈಲ್ವೆಯು ಸಜ್ಜಾಗಿದೆ!. ಹೋಳಿ ಸಂಭ್ರಮಕ್ಕೆ ದಿನಗಣನೆ ಆರಂಭವಾಗಿದೆ. ಸಾಲು ಸಾಲು ರಜೆಗಳು ಎದುರಾಗುವ ಹಿನ್ನೆಲೆ ಬೆಂಗಳೂರಿನಿಂದ ಬೇರೆ ಬೇರೆ ಕಡೆಗಳಲ್ಲಿ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಪ್ರಯಾಣಿಕರಿಗೆ ಅನುಕೂಲ ಒದಗಿಸುವ ಉದ್ದೇಶದಿಂದ ವಿಶೇಷ ಎಕ್ಸ್ಪ್ರೆಸ್ ರೈಲುಗಳ ಸಂಚಾರ ಸೇವೆಯನ್ನು ವಿಸ್ತರಣೆ ಮಾಡಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಹಬ್ಬದ ಸಮಯದಲ್ಲಿ ಪ್ರಯಾಣಿಕರ ಭಾರೀ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು ರೈಲು ಇಲಾಖೆಯು ಆಯ್ದ ವಿಶೇಷ ರೈಲುಗಳ ಸಂಚಾರ ಅವಧಿಯನ್ನು ವಿಸ್ತರಿಸಿದೆ. ಕರ್ನಾಟಕದ ಯಾವೆಲ್ಲ ಮಾರ್ಗದ ರೈಲುಗಳು ವಿಸ್ತರಣೆ ಆಗಿವೆ, ಅವುಗಳ ಸಂಖ್ಯೆ, ಸಮಯ, ವೇಳಾಪಟ್ಟಿ ಇಲ್ಲಿದೆ.

ಮಾರ್ಚ್ 3ರಂದು ಹೋಳಿ ಹಬ್ಬ ಸಂಭ್ರಮಾಚರಣೆ ಮಾಡಲಾಗುತ್ತದೆ. ಈ ಸಂಬಂಧ ರಾಜಧಾನಿ ಬೆಂಗಳೂರಿನಿಂದ ಬೀದರ್, ಕಲಬುರಗಿ ಮತ್ತು ಸಂತ್ರಾಗಾಚಿಯಂತಹ ದೂರದ ಊರುಗಳಿಗೆ ಸಂಚರಿಸುವ ರೈಲುಗಳ ಅವಧಿಯನ್ನು 2026 ಮಾರ್ಚ್ ಅಂತ್ಯ ತಿಂಗಳಾಂತ್ಯದವರೆಗೆ ಕಾರ್ಯಾಚರಣೆ ಮುಂದುವರಿಸಲಿವೆ. ಎಸ್ಎಂವಿಟಿ ಬೆಂಗಳೂರು-ಬೀದರ್ ರೈಲು (06539) ಈಗ ಮಾರ್ಚ್ 29ರವರೆಗೆ ಲಭ್ಯವಿರುತ್ತದೆ. ಇದರಿಂದಾಗಿ ಕೊನೆಯ ಕ್ಷಣದಲ್ಲಿ ಪ್ರಯಾಣ ಬೆಳೆಸುವವರಿಗೂ ರೈಲು ಸೇವೆ ಲಭ್ಯವಾಗಲಿದೆ.
ವಿಸ್ತರಣೆ ಆದ ರೈಲುಗಳ ವೇಳಾಪಟ್ಟಿ
1. ಬೆಂಗಳೂರು- ಬೀದರ್- ಬೆಂಗಳೂರು ಮಧ್ಯದ ದ್ವಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲುಗಳು (06539 / 06540) ಫೆಬ್ರವರಿ 27ಕ್ಕೆ ಅಂತ್ಯವಾಗದೇ ಮಾರ್ಚ್ 01 ರಿಂದ ಮಾರ್ಚ್ 29 ರವರೆಗೆ ಸಂಚಾರ ಮಾಡಲಿದೆ.
2. ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ- ಬೆಂಗಳೂರು ಕಂಟೋನ್ಮೆಂಟ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲುಗಳು (06207 / 06208) ಫೆಬ್ರವರಿಗೆ ಕೊನೆಗೊಳ್ಳದೇ 29 ರವರೆಗೆ ಸೇವೆ ನೀಡುವಂತೆ ವಿಸ್ತರಣೆ ಮಾಡಲಾಗಿದೆ.
3. ಸಂತ್ರಾಗಚಿ- ಯಲಹಂಕ- ಸಂತ್ರಾಗಚಿ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲುಗಳು (02863 /02864) ಮಾರ್ಚ್ 5ರಿಂದ ಮಾರ್ಚ್ 28 ರವರೆಗೆ ಸೇವೆಗೆ ಲಭ್ಯ ಇರುವಂತೆ ವಿಸ್ತರಿಸಲಾಗಿದೆ.
ಹಬ್ಬಕ್ಕಾಗಿ ಊರುಗಳಿಗೆ ತೆರಳುವ ಪ್ರಮಾಣಿಕರಿಗೆ ಅನುಕೂಲ ಆಗಲಿದೆ. ಈ ವಿಶೇಷ ರೈಲುಗಳು ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲಿವೆ. ಹಾಲಿ ರೈಲುಗಳ ಮೇಲಿನ ಒತ್ತಡ ಕಡಿಮೆ ಮಾಡಲಿವೆ. ವಿಸ್ತರಣೆಗೊಂಡ ರೈಲುಗಳ ಹೆಚ್ಚಿನ ಮಾಹಿತಿಗಾಗಿ ಪ್ರಯಾಣಿಕರು https://enquiry.indianrail.gov.in/mntes/ ಗೆ ಭೇಟಿ ನೀಡಬೇಕು. ಜೊತೆಗೆ 139 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಬೇಕು ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು-ಬೆಳಗಾವಿ ರೈಲು ಸಮಯ ಪರಿಷ್ಕರಣೆ
ಸಾಂಸ್ಕೃತಿಕ ನಗರಿ ಮೈಸೂರು-ಉತ್ತರ ಕರ್ನಾಟಕದ ಬೆಳಗಾವಿಗೆ ಸಂಪರ್ಕ ಕಲ್ಪಿಸುವ ಎಕ್ಸ್ಪ್ರೆಸ್ ರೈಲು (17326) ಮೈಸೂರಿನಿಂದ ಈ ಮೊದಲು ಬೆಳಗ್ಗೆ 7 ಗಂಟೆಗೆ ಹೊರಡುತ್ತಿತ್ತು. ಅದರ ಸಮಯ ಪರಿಷ್ಕರಣೆ ಬಳಿಕ ಇಂದಿನಿಂದ ಬೆಳಗ್ಗೆ 08.45ಕ್ಕೆ ಸಂಚಾರ ಮಾಡಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.
-

ಬೆಂಗಳೂರು ರೈಲು-ರಸ್ತೆ ಪ್ರಯಾಣಿಕರಿಗೆ ಡಬಲ್ ಬೂಸ್ಟ್: ಮೇಲ್ಸೇತುವೆ ಓಪನ್, ರೈಲು ನಿಲುಗಡೆಗೆ ಚಾಲನೆ
-

Tour Package: ಕಾಶ್ಮೀರ, ವೈಷ್ಣೋದೇವಿ ಸೇರಿ ಪ್ರಮುಖ ತಾಣಗಳಿಗೆ 13 ದಿನ ಭಾರತ್ ಗೌರವ್ ರೈಲು ಪ್ರವಾಸ, ಬುಕ್ಕಿಂಗ್ ವಿವರ
-

ಮಂಗಳೂರಿಗೆ ರೈಲು ಬರಲ್ಲ ಕೇರಳ ಲಾಬಿ ಜೊತೆಗೆ ಸುಳ್ಳು ಭರವಸೆ: ಸುರತ್ಕಲ್, ಮೂಲ್ಕಿ, ಉಡುಪಿ, ಕಾರವಾರ ಜನರಿಗೆ ಅನ್ಯಾಯ
-

ರೈಲು ಪ್ರಯಾಣಿಕರಿಗೆ ಶುಭ ಸುದ್ದಿ: ಸಂಚರಿಸುವಾಗಲೇ ರೈಲು ಕ್ಲೀನ್; AI ತಂತ್ರಜ್ಞಾನದ ಮೂಲಕ ನಿಗಾ
-

Gold Rate Feb 16: ಚಿನ್ನದ ಬೆಲೆ 13,100 ರೂ., ಬೆಳ್ಳಿ ಬೆಲೆ 7,000 ರೂ. ಭರ್ಜರಿ ಇಳಿಕೆ, ಇಂದಿನ ಚಿನ್ನ – ಬೆಳ್ಳಿ ಬೆಲೆ
-

Gold: ಚಿನ್ನ ಎಂದಿಗೂ ನಿದ್ರಿಸುವುದಿಲ್ಲ: ಚಿನ್ನದ ಬೆಲೆ 1905ರಿಂದ 2026ರ ವರೆಗೆ ಎಷ್ಟಾಗಿದೆ, 120 ವರ್ಷದ ವಿವರ ಇಲ್ಲಿದೆ
-

T20 2026: ಭಾರತದ ವಿಜಯಕ್ಕೆ ಪಾಕಿಸ್ತಾನದಲ್ಲೂ ಸಂಭ್ರಮಾಚರಣೆ, ವಿಡಿಯೋ ವೈರಲ್ Viral Video
-

Horoscope February 16: ಈ ರಾಶಿಯವರಿಗೆ ವೃತ್ತಿಯಲ್ಲಿ ಪ್ರಗತಿ, ಆರೋಗ್ಯದಲ್ಲಿ ಸುಧಾರಣೆ, ದಿನ ಭವಿಷ್ಯ ಇಲ್ಲಿದೆ
-

ಫೆಬ್ರವರಿ 17 ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
-

Karnataka Weather: ಕರ್ನಾಟಕದಲ್ಲಿ ಮುಂದಿನ 3 ದಿನ ಹೇಗಿರಲಿದೆ ಹವಾಮಾನ, ಇಲ್ಲಿದೆ ಮಾಹಿತಿ
-

ಕರ್ನಾಟಕದ ಕರಾವಳಿಗೆ ಬರಲು ಐಟಿ – ಬಿಟಿ ಕಂಪನಿಗಳ ಹಿಂದೇಟು ಚರ್ಚೆ, ಸೋಷಿಯಲ್ ಮೀಡಿಯಾದಲ್ಲಿ ವಾಕ್ಸಮರ
-

Darshan Thoogudeepa Birthday: ನಟ ದರ್ಶನ್ ಹುಟ್ಟುಹಬ್ಬ: ವಿಶೇಷ ಪೋಸ್ಟ್ ಹಂಚಿಕೊಂಡ ಸೆಲೆಬ್ರಿಟಿಗಳು
-

Taapsee Pannu: ನರೇಂದ್ರ ಮೋದಿ ಇಷ್ಟದ ರಾಜಕಾರಣಿ; ಯಾಕೆಂದರೆ ಈ ದೇಶದಲ್ಲಿ ನಾನು ಇನ್ನೂ ಇರಬೇಕು: ನಟಿ ತಾಪ್ಸಿ ಪನ್ನು
-

ಕರ್ನಾಟಕದ ಐಪಿಎಸ್ ಸಿಂಗಂ ತಮಿಳುನಾಡಿಗೆ ಹೋಗಿ ಅತಂತ್ರವಾದ ಕಥೆಯಿದು: ಅಣ್ಣಾಮಲೈ ಬದುಕಿನ ತಿರುವು ಹಲವು
-

National Highway: ರಾಮನಗರ ಜಿಲ್ಲೆ ಮೇಲೆ ಹಾದುಹೋಗುವ ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಹಾಗೂ ಎಕ್ಸ್ಪ್ರೆಸ್ ವೇ
Disclaimer: This content was automatically imported from a third-party source via RSS feed. The original source is: https://kannada.oneindia.com/news/karnataka/holi-2026-passengers-swr-extends-special-trains-service-to-bidar-kalaburagi-and-santragachi-444203.html. xn--babytilbehr-pgb.com does not claim ownership of this content. All rights remain with the original publisher.
