Justasking Vs Justsaying: ನರೇಂದ್ರ ಮೋದಿ ಅಲ್ಗಾರಿದಮ್ ರಾಜ ಎಂದ ಕೆ. ಅಣ್ಣಾಮಲೈ; ಪ್ರಯೋಜನವೇನ್ರಿ ಎಂದ ಪ್ರಕಾಶ್ ರಾಜ್ | Narendra Modi Algorithm King says KAnnamalai Prakash Raj asks What’s benefit Tweet war

India

oi-Hitesh Y

ನಟ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಮತ್ತು ಆರ್‌ಎಸ್‌ಎಸ್‌ನ ಬಗ್ಗೆ ಕೊಡುವ ಕೆಲವು ಹೇಳಿಕೆಗಳು ಭಾರಿ ಸಂಚಲ ಸೃಷ್ಟಿ ಮಾಡುವುದು ಇದೆ. ಅಲ್ಲದೆ ಅವರ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಮಾಡುವ ಟ್ವೀಟ್‌ಗಳು ಪರ – ವಿರೋಧ ಚರ್ಚೆಗಳಿಗೆ ಕಾರಣವಾಗುವುದು ಇದೆ. ಇದೀಗ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಇನ್‌ಸ್ಟಾಗ್ರಾಮ್‌ ದಾಖಲೆಯ ಬಗ್ಗೆ ಪ್ರಶ್ನೆ ಮಾಡಿದ್ದು, ಈ ಟ್ವೀಟ್‌ ವೈರಲ್ ಆಗುತ್ತಿದೆ. ಇದಕ್ಕೆ ತಮಿಳುನಾಡಿನ ಬಿಜೆಪಿ ಮುಖಂಡ ಕೆ. ಅಣ್ಣಾಮಲೈ ಸೇರಿದಂತೆ ಹಲವರು ರಿಯಾಕ್ಟ್ ಮಾಡಿದ್ದಾರೆ. ಇಷ್ಟಕ್ಕೂ ನಟ ಪ್ರಕಾಶ್ ರಾಜ್ ಟ್ವೀಟ್ ಏನು ಇದಕ್ಕೆ ನೆಟ್ಟಿಗರ ರಿಯಾಕ್ಷನ್ ಹೇಗಿದೆ ಎನ್ನುವುದನ್ನು ನೋಡೋಣ.

ಪ್ರಧಾನಿ ನರೇಂದ್ರ ಇನ್‌ಸ್ಟಾಗ್ರಾಮ್‌ ಖಾತೆಯು ಹೊಸ ದಾಖಲೆ ಬರೆದಿದೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ 100 ಮಿಲಿಯನ್ (10 ಕೋಟಿ) ಫಾಲೋವರ್ಸ್ ಇದ್ದಾರೆ. ಈ ಮೂಲಕ ಹೊಸ ದಾಖಲೆ ಸೃಷ್ಟಿಯಾಗಿದೆ. ಅಲ್ಲದೆ ಇನ್‌ಸ್ಟಾಗ್ರಾಮ್‌ನಲ್ಲಿ ಅತಿ ಹೆಚ್ಚು ಫಾಲೋವರ್ಸ್ಸ್‌ಗಳನ್ನು ಹೊಂದಿರುವ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೂ ನರೇಂದ್ರ ಮೋದಿ ಅವರು ಪಾತ್ರರಾಗಿದ್ದಾರೆ.

JustAsking vs JustSaying

ಈ ವಿಷಯವನ್ನು ಮೋದಿ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ಸಂಭ್ರಮಿಸುತ್ತಿದ್ದಾರೆ. ಆದರೆ, ಇದರಿಂದ ಏನಾದರೂ ಪ್ರಯೋಜನವಿದೆಯೇ, ಭಾರತೀಯರಿಗೆ ಗೊತ್ತಾಗಬೇಕಾಗಿದೆ. #justasking ಎಂದು ನಟ ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದಾರೆ. ಈ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ಕೆಲವರು ಪ್ರಕಾಶ್ ರಾಜ್ ಅವರನ್ನು ಬೆಂಬಲಿಸಿದರೆ, ಹಲವರು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟಕ್ಕೂ ನಟ ಪ್ರಕಾಶ್ ರಾಜ್ ಅವರು ಟ್ವೀಟ್ ಮಾಡಿದ್ದೇನು, ಇದಕ್ಕೆ ಕೆ. ಅಣ್ಣಾಮಲೈ ರಿಪ್ಲೈ ಕೊಡುತ್ತಿರುವುದು ಯಾಕೆ ಎನ್ನುವುದನ್ನು ನೋಡೋಣ.

ನಟ ಪ್ರಕಾಶ್ ರಾಜ್ ಟ್ವೀಟ್‌ನಲ್ಲಿ ಏನಿದೆ

ಸೋಷಿಯಲ್ ಮೀಡಿಯಾ ಎಕ್ಸ್‌ ನಲ್ಲಿ ಕೆ. ಅಣ್ಣಾಮಲೈ ಅವರು, ಇತರರು ಆಲ್ಗೋರಿದಮ್‌ನ್ನು ಹೇಗೆ ಅರ್ಥಮಾಡಿಕೊಳ್ಳುವುದು ಎಂದು ನಿದ್ದೆ ಬಿಟ್ಟು ಪ್ರಯತ್ನಿಸುತ್ತಾರೆ. ಆದರೆ ನಮ್ಮ ಗೌರವಾನ್ವಿತ ಪ್ರಧಾನಮಂತ್ರಿ Narendra Modi ಅವರು ಆಲ್ಗೋರಿದಮ್‌ನ್ನು ಅರ್ಥಮಾಡಿಕೊಳ್ಳುವುದಿಲ್ಲ – ಅವರೇ ಆಲ್ಗೋರಿದಮ್‌. ಅವರು ದಾರಿ ತೋರಿಸುತ್ತಾರೆ, ಜಗತ್ತು ಅದನ್ನು ಅನುಸರಿಸುತ್ತದೆ. ನಮ್ಮ ಪ್ರಧಾನಮಂತ್ರಿಗೆ Instagram ನಲ್ಲಿ 100 ಮಿಲಿಯನ್ ಫಾಲೋವರ್ಸ್‌ಗಳನ್ನು ದಾಟಿದ ಸಾಧನೆ ಎಂದು ಬರೆದುಕೊಂಡಿದ್ದರು. ಇದಕ್ಕೆ ನಟ ಪ್ರಕಾಶ್ ರಾಜ್ ಅವರು, ಇದರಿಂದ ಏನಾದರೂ ಪ್ರಯೋಜನವಿದೆಯೇ ಎಂದು ಕೇಳಿದ್ದರು. #justasking

ಕೆ. ಅಣ್ಣಾಮಲೈ ಅವರು ಹೇಳಿದ್ದೇನು

ಪ್ರಕಾಶ್ ರಾಜ್ ಅವರ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕೆ. ಅಣ್ಣಾಮಲೈ ಅವರು ಅಣ್ಣಾ, ಬೇಡವಾದ ಸಲಹೆ! ಅಸಿಡಿಟಿಗೆ ಜೆಲುಸಿಲ್‌, ಬೆಂದ ಗಾಯಕ್ಕೆ ಬರ್ನೋಲ್‌ ಇದೆ. ಈಗ ಕೆಲವರಿಗೆ ಎರಡೂ ಬೇಕಾಗುವ ಸಮಯ ಬಂದಂತಿದೆ! ಎಂದು ವ್ಯಂಗ್ಯವಾಡಿದ್ದಾರೆ. ಅಲ್ಲದೆ #justsaying ಎಂದೂ ಹೇಳಿದ್ದಾರೆ.

ನೆಟ್ಟಿಗರು ಹೇಳಿದ್ದೇನು

ಇನ್ನು ನಟ ಪ್ರಕಾಶ್ ರಾಜ್ ಹಾಗೂ ಕೆ. ಅಣ್ಣಾಮಲೈ ಅವರ ಟ್ವೀಟ್ ವಾರ್‌ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಟ ಪ್ರಕಾಶ್ ರಾಜ್ ಅವರು ಈ ಹಿಂದೆ ತಮ್ಮ ಫೇಸ್‌ಬುಕ್ ಫಾಲೋವರ್ಸ್‌ಗಳ ಸಂಖ್ಯೆ 4 ಕೋಟಿಯಾದಾಗ ಥ್ಯಾಂಕ್ಸ್‌ ಹೇಳಿದ್ದರು ಎಂದು ಕೆಲವರು ಸ್ಕ್ರೀನ್‌ಶಾಟ್ ಶೇರ್ ಮಾಡಿಕೊಂಡಿದ್ದಾರೆ. ಇನ್ನೂ ಕೆಲವರು ಪ್ರಕಾಶ್ ರಾಜ್ ಅವರಿಗೆ ಬೆಂಬಲ ಸೂಚಿಸಿದ್ದಾರೆ. 10 ವರ್ಷಗಳಲ್ಲಿ 100 ಮಿಲಿಯನ್ ಅನುಯಾಯಿಗಳು ಆದರೆ 0 ಪತ್ರಿಕಾಗೋಷ್ಠಿಗಳು. ಅಲ್ಗಾರಿದಮ್ ರಾಜ ಮತ್ತು ಹೊಣೆಗಾರಿಕೆ ನಿಜಕ್ಕೂ ಶೂನ್ಯ. ರಾಷ್ಟ್ರ ಇನ್ನೂ ಕಾಯುತ್ತಿದೆ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ.


Disclaimer: This content was automatically imported from a third-party source via RSS feed. The original source is: https://kannada.oneindia.com/news/india/narendra-modi-algorithm-king-says-kannamalai-prakash-raj-asks-what-s-benefit-tweet-war-445323.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo