War: ವಿಶ್ವಸಂಸ್ಥೆ ತುರ್ತು ಸಭೆ: ಇರಾನ್ ಮೇಲಿನ ಜಂಟಿ ವೈಮಾನಿಕ ದಾಳಿಗೆ ಬೀಳುತ್ತಾ ಬ್ರೇಕ್ | War United Nations Security Council Calls Emergency Meeting Today Over Iran-Israel-US Conflict

International

oi-Shankrappa Parangi

Middle East War UN reaction: ಇರಾನ್ ಮೇಲೆ ಮೊದಲು ಇಸ್ರೇಲ್ ನಂತರ ಯುಎಸ್ ನಡೆಸಿದ ವೈಮಾನಿಕ ದಾಳಿಯು ಜಾಗತಿಕವಾಗಿ ಗಮನ ಸೆಳೆದಿದೆ. ಈ ಯುದ್ಧವು ಕೇವಲ ಮೂರು ರಾಷ್ಟ್ರಗಳಿಗೆ ಮಾತ್ರವಲ್ಲದೇ ವಿಶ್ವದ ಬೇರೆ ಬೇರೆ ರಾಷ್ಟ್ರಗಳ ಮೇಲೂ ಪರಿಣಾಮ ಬೀರುತ್ತಿದೆ. ಈ ಕಾರಣದಿಂದ ವಿಶ್ವಸಂಸ್ಥೆ (United Nation) ಇಂದಿನ ಬೆಳವಣಿಗೆಯನ್ನು ಖಂಡಿಸಿ ತುರ್ತು ಸಭೆ ಕರೆದಿದೆ. ತಡವಾದರೂ ಸಹಿತ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸಭೆ ಕರೆದಿದೆ.

ಯುಕೆ ಸಮಯ ಪ್ರಕಾರ ಇಂದು 21:00 ಗಂಟೆಗೆ ತುರ್ತು ಸಭೆ ಕರೆದಿದೆ. ವಿಶ್ವಸಂಸ್ಥೆಯ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ “ಮಧ್ಯಪ್ರಾಚ್ಯದಲ್ಲಿ ಇಂದಿನ ಮಿಲಿಟರಿ ಕ್ರಮ”ವನ್ನು ಖಂಡಿಸಿದ್ದಾರೆ. ಬಳಿಕ ತುರ್ತು ಸಭೆ ಕರೆದಿದ್ದಾರೆ. ಮಹತ್ವ ವಿಚಾರಗಳನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ. ಸಭೆಯ ಸಂಪೂರ್ಣ ಮಾಹಿತಿ ಭಾನುವಾರ ಹೊರ ಬರುವ ಸಾಧ್ಯತೆ ಇದೆ.

War United Nations

ಜಾಗತಿಕ ಮಟ್ಟದಲ್ಲಿ ಶಾಂತಿ-ಭದ್ರತೆ ಹಾಳು

ಇಸ್ರೇಲ್ ಹಾಗೂ ಯುಎಸ್ ಇರಾನ್ ಮೇಲೆ ನಡೆಸಿದ ಜಂಟಿ ಯುದ್ಧ ಹಾಗೂ ಪ್ರತಿ ದಾಳಿಯಂತಹ ಕ್ರಮಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಹಾಳು ಮಾಡುತ್ತವೆ. ಈ “ಹಗೆತನವನ್ನು ತಕ್ಷಣವೇ ನಿಲ್ಲಿಸಲು” ವಿಶ್ವಸಂಸ್ಥೆ ಕರೆ ನೀಡಿದೆ. ಪ್ರಮುಖ ಅಂತಾರಾಷ್ಟ್ರೀಯ ಬಿಕ್ಕಟ್ಟುಗಳ ಸಮಯದಲ್ಲಿ ಭದ್ರತಾ ಮಂಡಳಿಯ ತುರ್ತು ಸಭೆ ಹೆಚ್ಚಿನ ಮಹತ್ವ ಪಡೆಯುತ್ತದೆ. ಯುದ್ಧ ಮುಂದುವರಿದರೆ ಅದರಿಂದ ಜಾಗತಿಕವಾಗಿ ಉಂಟು ಮಾಡುವ ಪರಿಣಾಮಕ್ಕೆ ಅನುಗುಣವಾಗಿ ರಾಜತಾಂತ್ರಿಕ ದೃಷ್ಟಿಯಿಂದ ಈ ಸಭೆ ಕರೆದಿದೆ.

ಶಾಶ್ವತ ಸದಸ್ಯರ ನಡುವಿನ ವಿಭಜನೆಯಿಂದಾಗಿ ತ್ವರಿತ ಕಾರ್ಯಾಚರಣೆಯು ಕೆಟ್ಟ ಫಲಿತಾಂಶಗಳನ್ನು ನೀಡುತ್ತವೆ. ಯುದ್ಧ ಕುರಿತ ಔಪಚಾರಿಕ ಹೇಳಿಕೆಗಳು, ರಾಜತಾಂತ್ರಿಕ ಒತ್ತಡ ಮತ್ತು ಸಂಭಾವ್ಯ ನಿರ್ಣಯಗಳಿಗೆ ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ತಿಳಿಸಿದೆ. ಈ ಮೂಲಕ ಯುದ್ಧಕ್ಕೆ ಬ್ರೇಕ್ ಹಾಕಲು ವಿಶ್ವಸಂಸ್ಥೆ ಮುಂದಾಗಿರುವುದು ಇಂದಿನ ಸಭೆಯಿಂದ ಸ್ಪಷ್ಟವಾಗಿದೆ.

ಇರಾನ್‌ನ ಇಬ್ಬರು ಬಲಿಷ್ಠ ನಾಯಕರ ಸಾವು

ಇರಾನ್‌ ಮೇಲೆ ಇಂದಿನ ಇಸ್ರೇಲ್ ಮತ್ತು ಯುಎಸ್‌ ಜಂಟಿ ವೈಮಾನಿಕ ದಾಳಿಯಿಂದಾಗಿ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಮಾಂಡರ್ ಮೊಹಮ್ಮದ್ ಪಕ್ಪೌರ್ ಹಗೂ ಇರಾನ್ ರಕ್ಷಣಾ ಸಚಿವ ಮೇಜರ್ ಜನರಲ್ ಅಮೀರ್ ಹತಾಮಿ ಅವರು ಬಲಿಯಾಗಿದ್ದಾರೆ. ಇದರಿಂದ ಇರಾನ್ ಮತ್ತಷ್ಟು ಕೆರಳಿದೆ. ಒಂದೆಡೆ ಇರಾನ್ ಪ್ರತಿ ದಾಳಿ ಮುಂದುವರಿಸಿದೆ. ಇನ್ನೊಂದೆಡೆ ಅಮೆರಿಕ ಹಾಗೂ ಇಸ್ರೇಲ್ ಜಂಟಿ ವೈಮಾನಿಕ ದಾಳಿಯಿಂದ ಹಿಂದೆ ಸರಿಯುವ ಬಗ್ಗೆ ಸ್ಪಷ್ಟತೆ ಇಲ್ಲ. ಯುದ್ಧ ಹೀಗೆ ಮುಂದುವರಿದೆ ಭಾರೀ ಬೆಲೆ ತೆರಬೇಕಾಗುತ್ತದೆ. ಈ ಕಾರಣದಿಂದಾಗಿ ಯುದ್ಧ ಜಾಗತಿಕವಾಗಿ ತೀವ್ರ ಹಾನಿ ಉಂಟು ಮಾಡುವ ಸಂಭವವಿದೆ. ಇದರಿಂದ ಭಾರತದ ಮೇಲೂ ತನ್ನದೇ ಆದ ರೀತಿಯಲ್ಲಿ ಪರಿಣಾಮ ಉಂಟಾಗಲಿದೆ. ಹೀಗಾಗಿ ಭಾರತ ಶಾಂತಿಯಿಂದಿರಲು ಮೂರು ರಾಷ್ಟ್ರಗಳಿಗೂ ಕರೆ ನೀಡಿದೆ. ಈ ಮೂಲಕ ಭಾರತ ಜಾಗತಿಕ ಮೆಚ್ಚುಗೆಗೆ ಕಾರಣವಾಗಿದೆ.

Disclaimer: This content was automatically imported from a third-party source via RSS feed. The original source is: https://kannada.oneindia.com/news/international/war-united-nations-security-council-calls-emergency-meeting-today-over-iran-israel-us-conflict-445493.html. xn--babytilbehr-pgb.com does not claim ownership of this content. All rights remain with the original publisher.

We will be happy to hear your thoughts

Leave a reply

Babytilbehør
Logo